ಡಿ. 20, 2017: ಈ ವರ್ಷದ ಕ್ರಿಸ್‍ಮಸ್‍ ಆಚರಣೆಯನ್ನು ವಿಶೇಷ ರೀತಿಯಲ್ಲಿ ಬೆಳ್ತಂಗಡಿ ವಲಯದ ICYM ಯುವಜನರು ಹಮ್ಮಿಕೊಂಡಿದ್ದರು. ವಿವಿಧ ಚರ್ಚ್‍ಗಳ ಬಡಜನರಿಗೆ ಧನ ಸಹಾಯ ಹಾಗೂ ವಸ್ತುಗಳನ್ನು ಕ್ರಿಸ್‍ಮಸ್‍ ಕಾಣಿಕೆಯಾಗಿ ನೀಡಲಾಯಿತು. ಈ ಯೋಜನೆಯನ್ನು ವಲಯದ ನಿರ್ದೇಶಕರಾದ ವಂದನೀಯ ಅರುಣ್ ವಿಲ್ಸನ್ ಲೋಬೊ, ವಲಯದ ಅಧ್ಯಕ್ಷರಾದ ಮನೀಷ್ ಸಿಕ್ವೇರಾ, ವಲಯದ ಕಾರ್ಯದರ್ಶಿ ವಿವಿಯನ್ ಫೆರ್ನಾಂಡಿಸ್ ಹಾಗೂ ವಿವಿಧ ಚರ್ಚ್‍ಗಳ ICYM ಘಟಕದ ಅಧ್ಯಕ್ಷರ ಮುಂದಾಳತ್ವದಲ್ಲಿ ನಡೆಸಲಾಯಿತು.