ದಿ| ಡಾ| ಎ. ಪಿ. ಜೆ ಅಬ್ದುಲ್ ಕಲಾಂ ಸ್ಮರಣಾರ್ಥ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳು, ನಾರಾವಿ ಇದರ ಆಶ್ರಯದಲ್ಲಿ ನಾರಾವಿ ಚರ್ಚ್ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ದಿನಾಂಕ 08-10-2015ರಂದು ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ಕ್ರಾಸ್ ಘಟಕ ಪದವಿ ಕಾಲೇಜು ನಾರಾವಿ ಗ್ರಾಮ ಪಂಚಾಯತು ನಾರಾವಿ, ಲಯನ್ಸ್ ಕ್ಲಬ್ ನಾರಾವಿ, ಲಯನ್ಸ್ ಕ್ಲಬ್ ಶಿರ್ತಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ನಾರಾವಿ, ಶ್ರೀ ಸೂರ್ಯನಾರಾಯಣ ಯುವಕ ಮಂಡಲ ನಾರಾವಿ, ಜೈ ಮಾತೃಭೂಮಿ ಯುವಜನ ಸಂಘ ನಾರಾವಿ, ಮಮ್ತಾಜ್ ಫ್ರೆಂಡ್ಸ್ ನಾರಾವಿ, ಸರಕಾರಿ ಪ್ರೌಢಶಾಲೆ ನಾರಾವಿ, ರಿಕ್ಷಾ ಚಾಲಕ-ಮಾಲಕರ ಸಂಗ ನಾರಾವಿ ಇವರ ಸಹಭಾಗಿತ್ವದಲ್ಲಿ ಕೆ.ಎಂ.ಸಿ ಆಸ್ಪತ್ರೆಯ ರಕ್ತ ನಿಧಿ ಘಟಕ, ಮಂಗಳೂರು ಇವರ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ಅಂಗದಾನದ ಬಗ್ಗೆ ಅರಿವು ಅಭಿಯಾನವನ್ನು ನಡೆಸಲಾಯಿತು.
ಬೆಳಿಗ್ಗೆ 09.00 ಗಂಟೆಗೆ ನಾರಾವಿ ಚರ್ಚ್ ವಠಾರದಿಂದ ಅಭಿಯಾಣಕ್ಕೆ ಚಾಲನೆ ನೀಡಲಾಯಿತು. ಬಳಿಕ ನಾರಾವಿ ಬಸ್ಸ್ಟ್ಯಾಂಡ್ ಬಳಿ ನಡೆದ ಕಾರ್ಯಕ್ರಮವನ್ನು ನಾರಾವಿ ಗ್ರಾಮ ಪಂಚಾಯತು ಅಧ್ಯಕ್ಷರಾದ ಶ್ರೀ ರವೀಂದ್ರ ಪೂಜಾರಿ, ದಿ| ಡಾ| ಎ. ಪಿ. ಜೆ ಅಬ್ದುಲ್ ಕಲಾಂರವರಿಗೆ ದಿವ್ಯ ಪುಷ್ಪಾಂಜಲಿ ಅರ್ಪಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಂದನೀಯ ಸ್ವಾಮಿ ಲುವಿಸ್ ಕುಟಿನ್ಹೊ ಮಾತನಾಡಿ, ನಾವೆಲ್ಲರೂ ಜೀವವನ್ನು ಉಳಿಸುವ ಕಾರ್ಯವನ್ನು ಮಾಡೋಣ ಎಂದು ಕರೆಯಿತ್ತರು. ಡಾ| ಪ್ರಕಾಶ್ರವರು ರಕ್ತದಾನ ಹಾಗೂ ಅಂಗದಾನ ಇದರ ಬಗ್ಗೆ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಚಂದ್ರಕಲಾ, ತಾಲೂಕ್ ಪಂಚಾಯತ್ ಸದಸ್ಯರಾದ ಶ್ರೀ ಜಯಂತ್ ಕೋಟ್ಯಾನ್, ಮುಖ್ಯೋಪಾಧ್ಯಾಯರಾದ ವಂದನೀಯ ಸ್ವಾಮಿ ಕಿರಣ್ ಪಿಂಟೊ ಹಾಗೂ ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಜರಿದ್ದರು. ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ ಸ್ವಾಗತಿಸಿ, ಶ್ರೀ ರಾಜೇಶ್ ಜೈನ್ ವಂದಿಸಿದರು. ಶ್ರೀ ಜೋನ್ಸನ್ ಕಾರ್ಯಕ್ರಮ ನಿರೂಪಿಸಿದರು ಸುಮಾರು 70 ಮಂದಿ ರಕ್ತದಾನ ಮಾಡಿದರು.
Comments powered by CComment